Blog : ಕೃಷ್ಣ-ಸುದೀಪ ಹೊಸ ಸಿನಿಮಾ-Sudeep-Krishna's new movie
ಕೃಷ್ಣ-ಸುದೀಪ  ಹೊಸ ಸಿನಿಮಾ-Sudeep-Krishna's new movie

ಬಿಡುಗಡೆ ಆದ ಕೇಂದ್ರಗಳೆಲ್ಲೆಲ್ಲಾ ಭರ್ಜರಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ 'ಹೆಬ್ಬುಲಿ'..ಅನೇಕ ತಿರುವು, ಸಾಹಸ, ಸಂಗೀತಗಳಿಂದ ಎಲ್ಲರ ಸಿನಿಮಾ ಪ್ರೀಯರ ಮೆಚ್ಚುಗೆ ಪಡೆದಿದೆ. ಎಸ್. ಕೃಷ್ಣ ಅವರು ಚಿತ್ರಕಥೆ ರಚಿಸಿ ನಿರ್ದೇಶಿಸಿರುವ 'ಹೆಬ್ಬುಲಿ'ಯಲ್ಲಿ ಕಿಚ್ಚ ಸುದೀಪ್ ನಾಯಕರಾಗಿ ಮಿಂಚಿದ್ದಾರೆ. ಈ ನಿರ್ದೇಶಕ-ನಟ ಜೋಡಿ ತೆರೆಯ ಮೇಲೆ ಮೋಡಿ ಮಾಡಿದೆ. ಯಾವುದೇ ಚಿತ್ರದ ಯಶಸ್ಸಿಗೆ ಅನೇಕ ಕಾರಣಗಳಿದ್ದರೂ, ನಿರ್ದೇಶಕ-ನಟರ ಜೋಡಿಯೂ ಒಂದು ಕಾರಣ..'ಹೆಬ್ಬುಲಿ'ಯ ಘರ್ಜನೆಗೂ ಇದು ಒಂದು ಕಾರಣ.

ಈಗ ವಿಷಯ ಏನಪ್ಪಾ ಎಂದರೆ 'ಹೆಬ್ಬುಲಿ'ಯ ಗೆಲುವಿನ ಸಂಭ್ರಮದಲ್ಲಿರುವ ನಿರ್ದೇಶಕ ಎಸ್. ಕೃಷ್ಣ ಅವರು ಟ್ವೀಟ್ ಮಾಡಿರುವ ಪ್ರಕಾರ ಈ ಜೋಡಿ ಮತ್ತೊಂದು ಸಿನೆಮಾ ಮಾಡಲಿದೆ !!! ಚಿತ್ರಕಥೆ ಹಂತದಲ್ಲಿರುವ ಈ ಚಿತ್ರಕ್ಕೆ ಕಿಚ್ಚ ಸುದೀಪ ಅವರು ನಾಯಕರು ಅಂತ ಎಸ್. ಕೃಷ್ಣ ಹೇಳಿಕೊಂಡಿದ್ದಾರೆ..

ಕೃಷ್ಣ-ಸುದೀಪ ಅವರ ಜೋಡಿ ಮತ್ತೊಮ್ಮೊ ಪ್ರೇಕ್ಷಕರನ್ನೆಲ್ಲ ರಂಜಿಸಲಿ ಹಾಗೂ ಚಿತ್ರ ತಂಡಕ್ಕೆ ಶುಭವಾಗಲಿ ಎಂದು shomti ತಂಡ ಶುಭ ಹಾರೈಸುತ್ತದೆ !!